ಚೆಟ್ಟಳ್ಳಿ, ಡಿ. 15: ಮಹಾ ವಿದ್ವಾಂಸ ಶಂಸುಲ್ ಉಲಮಾ ಇ.ಕೆ. ಅಬೂಬಕರ್ ಮುಸ್ಲಿಯಾರ್ (ಖಸಿ) ಇವರ ಅನುಸ್ಮರಣಾ ಕಾರ್ಯಕ್ರಮ ಸುಂಟಿಕೊಪ್ಪ ಎಸ್‍ಎಂಎಸ್ ಅರಬಿಕ್ ಕಾಲೇಜಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪಖಾಝಿ ಅಬ್ದುಲ್ಲ ಫೈಝಿ ವಹಿಸಿದ್ದರು. ಅವರ ಆದರ್ಶ ಸಿದ್ಧಾಂತವನ್ನು ಇವತ್ತಿನ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಬ್ದುಲ್ಲಾ ಫೈಝಿ ಕರೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ದಾರಿಮಿ ಅಸೋಸಿಯೇಷನ್ ಅಧ್ಯಕ್ಷ ಸೂಫಿ ದಾರಿಮಿ ವಹಿಸಿದ್ದರು. ಉಸ್ಮಾನ್ ಫೈಜಿ ಸುಂಟಿಕೊಪ್ಪ, ಹಸೈನಾರ್ ಫೈಜಿ ಶನಿವಾರಸಂತೆ, ಇಕ್ಬಾಲ್ ಮೌಲವಿ, ಮಾಹಿನ್ ದಾರಿಮಿ, ಹಮೀದ್ ದಾರಿಮಿ, ಸಿಎಂ. ಹಮೀದ್ ಮೌಲವಿ, ಸುಂಟಿಕೊಪ್ಪ ಹಂಸ ಹಾಜಿ ಕುಶಾಲನಗರ, ಹಮೀದ್ ಬೆಟ್ಟಗೇರಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್‍ಲೀಕ್ ದಾರಿಮಿ ಸ್ವಾಗತಿಸಿದರು.