ಮಡಿಕೇರಿ, ಡಿ. 15: ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕೊಳ್ಳೆಗಾಲದ ಕಾವೇರಿ ವನ್ಯಜೀವಿ ವಿಭಾಗದ ವತಿಯಿಂದ ತಾ. 19 ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಮಹಶೀರ್ ಮೀನು ಸಂರಕ್ಷಣೆ ಹಾಗೂ ಸಂತಾನೋತ್ಪತ್ತಿ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿದೆ. ಹಾರಂಗಿಯಲ್ಲಿನ ಮಹಶೀರ್ ಮೀನುಗಳ ಸಂತಾನೋತ್ಪತ್ತಿ ಕುರಿತು ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಟಿ. ದರ್ಶನ್ ಅವರು ಪಾಲ್ಗೊಳ್ಳಲಿದ್ದಾರೆ.

‘ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿಯ ಶ್ಯಾಮ್ ಅಯ್ಯಪ್ಪ ಹಾಗೂ ಸಿ.ಪಿ. ಅಯ್ಯಪ್ಪ ಅವರುಗಳು ಕೂಡ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.