ಮಡಿಕೇರಿ, ಡಿ. 10: 1785 ರ ಡಿಸೆಂಬರ್ 12 ರಂದು ದೇವಟ್ಟಿ ಪರಂಬ್‍ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದ ಕೊಡವ ಬುಡಕಟ್ಟು ಜನಾಂಗದವರ ಗೌರವಾರ್ಪಣೆ ಕಾರ್ಯಕ್ರಮ ತಾ.12 ರಂದು ಸಿ.ಎನ್.ಸಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಂದು ದೇವಟ್ಟಿ ಪರಂಬುವಿನಲ್ಲಿ ಅಗಲಿದ ಹಿರಿಯರಿಗೆ ಮೀದಿ ಅರ್ಪಿಸುವ ಮೂಲಕ ಬಲಿದಾನ ಮಾಡಿದ ಪೂರ್ವಜರನ್ನು ನೆನಪಿಸಿಕೊಳ್ಳಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ತಿಳಿಸಿದ್ದಾರೆ.

ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು ಗೌರವಾರ್ಪಣೆ ನಡೆಯುತ್ತಿದ್ದು ತಾ.12 ರಂದು ಸಿ.ಎನ್.ಸಿ ವತಿಯಿಂದ ದೇವಟ್ಟಿ ಪರಂಬುವಿನಲ್ಲಿ 73 ನೇ ಬಾರಿಯ ಗೌರವಾರ್ಪಣೆ ಕಾರ್ಯಕ್ರಮವಾಗಲಿದೆ ಎಂದು ಅವರು ತಿಳಿಸಿದ್ದಾರೆ.