ಕುಶಾಲನಗರ, ಡಿ. 9: ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಹಿತ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ ಘಟನೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಬಳಿ ನಡೆದಿದೆ.
ನಾಕೂರು-ಶಿರಂಗಾಲ ಗ್ರಾಮದ ನಿವಾಸಿ ಕೆ.ಕೆ. ಶ್ರೀನಿವಾಸ (56 ವರ್ಷ) ಬಂಧಿತ ವ್ಯಕ್ತಿ. ಈತನ ಬಳಿಯಿದ್ದ 7.2 ಲೀಟರ್ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಸೋಮವಾರಪೇಟೆ ತಾಲೂಕಿನ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವು ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಬಕಾರಿ ಅಕ್ರಮಗಳು ತಡೆಗಟ್ಟುವ ಸಲುವಾಗಿ ಗಸ್ತು ಕಾರ್ಯ ನಡೆಸುತ್ತಿದ್ದ ಸಂದರ್ಭ ಪ್ರಕರಣ ಪತ್ತೆಯಾಗಿದೆ. ಹೇರೂರು ಮುಖ್ಯ ರಸ್ತೆ ಬಸವನಹಳ್ಳಿ ಗ್ರಾಮದ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಕೆ.ಕೆ. ಶ್ರೀನಿವಾಸ ಎಂಬಾತ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಆರ್.ಎಂ. ಚೈತ್ರಾ, ಅರಕ್ಷಕರಾದ ಕೆ.ವಿ. ಸುಮತಿ, ಮಹಾಂತೇಶ್ ಸುಣಗಾರ, ಮಹಾದೇವ್ ಹಾಗೂ ಚಾಲಕರಾದ ತ್ಯಾಗರಾಜು, ಜಿತೇಂದ್ರ ಪಾಲ್ಗೊಂಡಿದ್ದರು.