ಚೆಟ್ಟಳ್ಳಿ, ಡಿ. 6: ಎಸ್‍ಎಸ್‍ಎಫ್ ಪಾಲಿಬೆಟ್ಟ ಸೆಕ್ಟರ್ ಆಶ್ರಯದಲ್ಲಿ ಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಬ್ಲಡ್ ಸೈಬೋ ಮತ್ತು ವೈದ್ಯಕೀಯ ಕಾಲೇಜು ಮಡಿಕೇರಿ ಸಹಯೋಗದೊಂದಿಗೆ ಮಾಲ್ದಾರೆ ನೂರುಲ್ ಈಮಾನ್ ಮದ್ರಸದಲ್ಲಿ ರಕ್ತದಾನ ಶಿಬಿರ ನಡೆಯಿತು.

ಎಸ್‍ಎಸ್‍ಎಫ್ ಜಿಲ್ಲಾ ಸಮಿತಿ ಸದಸ್ಯ ಜುನೈದ್ ಅಮ್ಮತ್ತಿ ಉದ್ಘಾಟಿಸಿದರು. ಮಹಲ್ ಕಾರ್ಯದರ್ಶಿ ನಿಸಾರ್ ಮಾತನಾಡಿದರು.

ರಕ್ತದಾನದ ಮಹತ್ವದ ಬಗ್ಗೆ ವೈದ್ಯಕೀಯ ಕಾಲೇಜಿನ ಡಾ. ಕರುಂಬಯ್ಯ ಮಾತನಾಡಿದರು. ಸಭೆಯಲ್ಲಿ ಶಾಖೆ ಅಧ್ಯಕ್ಷ ಅಶ್ಕರ್ ಝೈನಿ, ಮಹಲ್ ಖತೀಬರಾದ ಹಸೈನಾರ್ ಮಹ್ಳರಿ, ಆಸೀಸ್ ಉಸ್ತಾದ್, ವೈದ್ಯಕೀಯ ಕಾಲೇಜು ಸಿಬ್ಬಂದಿ ಎಸ್‍ಎಸ್‍ಎಫ್ ಪಾಲಿಬೆಟ್ಟ ಶಾಖೆ ಸದಸ್ಯರು ಹಾಜರಿದ್ದರು.

ಜಿಲ್ಲಾ ಸಮಿತಿ ಸದಸ್ಯರಾದ ಝುಬೈರ್ ಸಅದಿ ಡಿವಿಶನ್ ಅಧ್ಯಕ್ಷ ಯೂಸುಫ್ ಝೈನಿ, ಸೆಕ್ಟರ್ ಕಾರ್ಯದರ್ಶಿ ಜಾಬಿರ್ ಮಟ್ಟಂ ಸಹ ಕಾರ್ಯದರ್ಶಿ ಸಾಬೀತ್ ಮಾಲ್ದಾರೆ, ಖಜಾಂಚಿ ಶೌಖತ್ ಪಾಲಿಬೆಟ್ಟ ಸೇರಿ ಹಲವು ನಾಯಕರು ಕಾರ್ಯಕರ್ತರು ರಕ್ತದಾನ ಮಾಡಿದರು. ಖಮರುದ್ದೀನ್ ಅನ್ವಾರಿ ಸ್ವಾಗತಿಸಿದರು.