ಸುಂಟಿಕೊಪ್ಪ, ಡಿ. 4: ರಾಜ್ಯ ಸರಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಸಕಾಲ ಸಪ್ತಾಹ ಯೋಜನೆಯನ್ನು ಕಂದಾಯ ಇಲಾಖೆಯಲ್ಲಿ ಆಯೋಜಿಸಲಾಗಿದೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ನಾಡಕಚೇರಿಯ ಉಪತಹಶೀಲ್ದಾರ್ ಕೆ. ಶುಭಾ ತಿಳಿಸಿದ್ದಾರೆ.

ನವೆಂಬರ್ 30 ರಿಂದ ಆರಂಭಗೊಂಡು ತಾ. 5 ರವರೆಗೆ ಸಕಾಲ ಸಪ್ತಾಹ ಯೋಜನೆಯು ಸುಂಟಿಕೊಪ್ಪ ಕಂದಾಯ ಇಲಾಖೆಯಲ್ಲಿ ಜಾರಿಗೊಳಿಸಲಾಗಿದ್ದು, ರಾಜ್ಯ ಸರಕಾರದ 98 ಇಲಾಖೆಗಳು ಹಾಗೂ 1025 ಸೇವೆಗಳು ಏಕಕಾಲದಲ್ಲಿ ಲಭ್ಯವಿದ್ದು ಜನತೆಯು ಆಡಳಿತದಲ್ಲಿ ಸುಧಾರಣೆಯನ್ನು ತಂದು ನಾಗರಿಕ ತುರ್ತು ಸೇವೆಯನ್ನು ಸುಧಾರಿಸುವ ದಿಸೆಯಲ್ಲಿ ಇದನ್ನು ರಾಜ್ಯ ಸರಕಾರವು ಜಾರಿಗೊಳಿಸಿದ್ದು ನಾಗರೀಕರು ತುರ್ತು ಸೇವೆ ಮಾಹಿತಿ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಉಪತಹಶೀಲ್ದಾರ್ ಕೆ. ಶುಭಾ ಮಾಹಿತಿ ನೀಡಿ, ಸಾರ್ವಜನಿಕರಿಗಾಗಿ ನೀಡಲಾಗಿರುವ ಸಕಾಲ ಯೋಜನೆಯ ಸೇವೆಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.