ಮಡಿಕೇರಿ, ಡಿ. 1: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿದ ಮಹಿಳೆಯರಾದಿಯಾಗಿ ಹದಿಮೂರು ಮಂದಿ ಇದ್ದ ತಂಡ ದಾಂಧಲೆ ನಡೆಸಿದ್ದಲ್ಲದೆ, ಯುವಕನ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕಳೆದ ತಾ. 30 ರಂದು ರಾತ್ರಿ ಬಿಳಿಗೇರಿ ಗ್ರಾಮದ ನಿಶ್ಚಲ್ ದಂಬೆಕೋಡಿ ತನ್ನ ಮನೆಯಲ್ಲಿದ್ದ ಸಂದರ್ಭ ಮನೆಗೆ ನುಗ್ಗಿದ ಅದೇ ಕುಟುಂಬದವರಾದ 13 ಮಂದಿಯ ತಂಡ ಕಲ್ಲು, ಕತ್ತಿ, ದೊಣ್ಣೆಗಳಿಂದ ಮನೆಯ ಕಿಟಕಿ, ಬಾಗಿಲುಗಳಿಗೆ ಹಾನಿ ಪಡಿಸಿದ್ದಲ್ಲದೆ, ನಿಶ್ಚಲ್‍ನನ್ನು, ಆತನ ತಾಯಿಯನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ಕಳೆದುಕೊಂಡ ಕುಟುಂಬದವರಾದ 13 ಮಂದಿಯ ತಂಡ ಕಲ್ಲು, ಕತ್ತಿ, ದೊಣ್ಣೆಗಳಿಂದ ಮನೆಯ ಕಿಟಕಿ, ಬಾಗಿಲುಗಳಿಗೆ ಹಾನಿ ಪಡಿಸಿದ್ದಲ್ಲದೆ, ನಿಶ್ಚಲ್‍ನನ್ನು, ಆತನ ತಾಯಿಯನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ಕಳೆದುಕೊಂಡ ನಿಶ್ಚಲ್ ನೀಡಿದ ದೂರಿನನ್ವಯ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳು ಸ್ಥಳ ಮಹಜರು ಮಾಡಿ, ಶೇಷಗಿರಿ, ದರ್ಶನ್, ಅರುಣ್, ಮಿತ್ರ, ಮಾಚಯ್ಯ, ನಂಜಪ್ಪ, ಭವಾನಿಶಂಕರ್, ಮನೋಜ್, ಮಧು, ಸ್ವಪ್ನ, ಸ್ಮಿತ, ತಾರ ಹಾಗೂ ಹೇಮಾವತಿ ಅವರುಗಳ ವಿರುದ್ಧ ಪ್ರ.ಸಂ. 154/2020, ಸೆಕ್ಷನ್ 143, 144, 147, 148, 448, 427, 323, 324, 504, 506 ಖ/ತಿ 149, ಐಪಿಸಿ ಸೆಕ್ಷನ್ 2 (ಎ) ಕೆಪಿಡಿಎಲ್‍ಪಿ ಕಾಯ್ದೆ ಪ್ರಕಾರ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.