ಸಂಪಾಜೆ, ನ. 19: ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತಾ. 16 ರಂದು ಬೆಳಿಗ್ಗೆ 8 ಗಂಟೆಗೆ ದೀಪಾವಳಿ, ಬಲಿಪಾಡ್ಯಮಿ ಹಾಗೂ ವೃಶ್ಚಿಕ ಸಂಕ್ರಾಂತಿ ಪೂಜೆ ನಡೆಯಿತು. ಗ್ರಾಮದ ಸಮಸ್ತ ಭಕ್ತಾದಿಗಳು ಆಗಮಿಸಿ ದೇವರ ಅರಶಿನ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಪೂಜಾ ವಿಧಿವಿಧಾನಗಳ ನಂತರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಾರ್ಗದರ್ಶಕರಾಗಿರುವ ಶ್ರೀ ಐತ ಮೊಗೇರ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.