ವೀರಾಜಪೇಟೆ ವರದಿ, ನ. 12: ಕೊಡಗು-ಕೇರಳವನ್ನು ಬೆಸೆದುಕೊಂಡಿರುವ ಆದಿ ಬೈತೂರ್ ದೇವಸ್ಥಾನ ಉಲಿಕಲ್ಲ್, ಇಲ್ಲಿ ಕೊರೊನಾ ಕಾರಣದಿಂದ ನಿತ್ಯ ಪೂಜೆಗಳು ಪ್ರತಿದಿನ ಬೆಳಿಗ್ಗೆ 5.30 ರಿಂದ 9.30 ರವರೆಗೆ ಮಾತ್ರ ನಡೆಯುತ್ತಿದೆ.

ಕೊಡಗಿನಿಂದ ತೆರಳುವ ಭಕ್ತಾದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಮಾಕುಟ್ಟ ಗೇಟ್‍ನಲ್ಲಿ ತಪಾಸಣೆಗೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ದೇವಸ್ಥಾನಕ್ಕೆ ತೆರಳುವ ಮುನ್ನ ಪರೀಕ್ಷೆ ಮಾಡಿಸಿಕೊಂಡು ಆನ್‍ಲೈನ್ ಪಾಸ್‍ಗಳನ್ನು ಪಡೆದುಕೊಂಡು ಹೋಗುವುದು ಒಳಿತು ಎಂದು ತಕ್ಕರಾದ ಪುಗ್ಗೆರ ಪೆÇನ್ನಪ್ಪ ಮಾಹಿತಿ ನೀಡಿದ್ದಾರೆ.