*ಸಿದ್ದಾಪುರ ನ. 12: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆರಂಭಿಸಲಾಗುತ್ತಿರುವ ಶುದ್ಧ ನೀರಿನ ಘಟಕ ಮತ್ತು ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರದ ಉದ್ಘಾಟನಾ ಸಮಾರಂಭ ತಾ. 15 ರಂದು ನಡೆಯಲಿದೆ.

ನೀರಿನ ಘಟಕವನ್ನು ಚೆಟ್ಟಳ್ಳಿಯ ಅರ್ಚಕ ಯೋಗೀಶ್ ಭಟ್, ಖತೀಬ್ ನೂರುದ್ದೀನ್ ಜುಹ್ರಿ ಹಾಗೂ ಧರ್ಮಗುರು ಸ್ಟೀಫನ್ ಅಲೆಕ್ಸ್ ಅವರುಗಳು ಉದ್ಘಾಟಿಸಲಿದ್ದಾರೆ.

ಕಾಫಿ ಯಂತ್ರವನ್ನು ಬೆಳೆಗಾರ ಐಯ್ಯಂಡ್ರ ಸಿ.ರಾಘವಯ್ಯ, ಬಿದ್ದಂಡ ಎ. ಅಚ್ಚಯ್ಯ, ಹೊಸಮನೆ ಟಿ.ಪೂವಯ್ಯ ಹಾಗೂ ವರ್ತಕ ಇಸ್ಮಾಯಿಲ್ ಅವರುಗಳು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಂಘದ ಮಾಜಿ ಉಪಾಧ್ಯಕ್ಷರಾದ ಹೆಚ್.ಎಸ್. ತಿಮ್ಮಪ್ಪಯ್ಯ, ಬೆಳೆಗಾರ ಚೇರಳತಮ್ಮಂಡ ಆನಂದ, ಪುತ್ತರಿರ ಕೆ.ದೇವಯ್ಯ, ಮಾಜಿ ಕಾರ್ಯ ನಿರ್ವಹಣಾಧಿಕಾರಿ ಮುಳ್ಳಂಡ ಮಾಯಮ್ಮ, ಬಿಜೆಪಿ ಶಕ್ತಿ ಕೇಂದ್ರದ ಬಲ್ಲಾರಂಡ ಕಂಠಿ ಕಾರ್ಯಪ್ಪ, ಬೆಳೆಗಾರ ಮುಳ್ಳಂಡ ಟಿ. ಚಂಗಪ್ಪ, ವಾಲ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಂಚೆಮನೆ ಸುಧಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.