ಸಿದ್ದಾಪುರ, ನ. 12: ಅರೆಕಾಡು ಗ್ರಾಮದ ಬಲಂಜಿಕೆರೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ ತಾ.15 ರಂದು ನಡೆಯಲಿದೆ. 15 ರಂದು ಬೆಳಿಗ್ಗೆ ಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಈ ಬಾರಿ ಕೊರೊನಾ ವೈರಸ್ ಹಿನ್ನೆಲೆ ಸರ್ಕಾರದ ಮಾರ್ಗ ಸೂಚಿಯಂತೆ ಸರಳವಾಗಿ ಆಚರಿಸಲಾಗುವುದೆಂದು ದೇವಾಲಯದ ಟ್ರಸ್ಟ್‍ನ ಅಧ್ಯಕ್ಷ ಬಿ.ವೈ ರಘು ಆನಂದ ತಿಳಿಸಿದ್ದಾರೆ.