ಮಡಿಕೇರಿ, ನ.9 : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2020-25ರ ಅವಧಿಗೆ ಆಡಳಿತ ಮಂಡಳಿ ಚುನಾವಣೆ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು. ಒಟ್ಟು 17 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಚುನಾವಣೆ ನಡೆಯಿತು.ಮಡಿಕೇರಿ ತಾಲೂಕಿನ ಐದು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸೂದನ ಎಸ್.ಈರಪ್ಪ ಅವರಿಗೆ 187 ಮತಗಳು, ಕೋಳುಮುಡಿಯನ ಅನಂತಕುಮಾರ್‍ಗೆ 166 ಮತಗಳು, ಕುಂಬುಗೌಡನ ವಿನೋದ್ ಕುಮಾರ್‍ಗೆ 149, ಮಂದ್ರೀರ ಜಿ. ಮೋಹನ್‍ದಾಸ್ 148, ಅಜ್ಜಿನಂಡ ಎಂ. ಗೋಪಾಲಕೃಷ್ಣ 118 ಮತಗಳನ್ನು ಪಡೆದು ಗೆಲುವು ಪಡೆದರು.ಪರಾಜಿತರಾದ ಬೆಪ್ಪುರನ ಎಂ. ಬೋಪಯ್ಯ 113, ಚೊಂಡಿರ ಚಂಗಪ್ಪ 94, ಪಟ್ಟಡ ಎಂ. ಉಲ್ಲಾಸ 68, ಚೆನಂಡ ಗಿರೀಶ್ ಪೂಣಚ್ಚ 68, ಕೇಕಡ ಎಂ.ಗಿರೀಶ್ 68, ಮಂಡುವಂಡ ಬಿ. ಜೋಯಪ್ಪ 38 ಮತಗಳನ್ನು ಪಡೆದರು. ಐದು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದರು. ತೀವ್ರ ಪೈಪೋಟಿ ಇದ್ದ ಸೋಮವಾರಪೇಟೆಯಲ್ಲಿ ಮೂರು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿದ್ದರು. ಕೆ.ಕೆ. ಗೋಪಾಲ 158, ಸಿ.ಸಿ. ವಿಜಯ ಕುಮಾರ್ 145, ಬಿ.ಈ.ಬೋಪಯ್ಯ ಅವರು 143 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಸೋಲುಕಂಡ ರಾಜು ಸಿ. ದಳವಾಯಿ 138, ಸಿ.ಎನ್. ತಮ್ಮಯ್ಯ 111, ಎ.ಹೆಚ್. ರವಿ 98 ಮತಗಳನ್ನು ಪಡೆದರು. ಹಾಲಿ ಅಧ್ಯಕ್ಷ ಬಿ.ಈ.ಬೋಪಯ್ಯ ಅವರು ಗೆಲುವು ಸಾಧಿಸಿದರು. ವೀರಾಜಪೇಟೆ ಕ್ಷೇತ್ರದ ಮೂರು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿಸಿದ್ದು, ಮಿತ್ರ ಕೂಟದಿಂದ ಎಸ್.ಎಸ್. ಸುರೇಶ್, ಕೊಣಿಯಂಡ ಬೋಪಣ್ಣ,

(ಮೊದಲ ಪುಟದಿಂದ) ಪೆಮ್ಮಂಡ ಬೋಪಣ್ಣ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಚೋಟು ಕಾವೇರಿ, ಮಾಜಿ ನಿರ್ದೇಶಕ ಚಂಗಪ್ಪ ಅವರು ನಾಮಪತ್ರ ವಾಪಸ್ ಪಡೆದಿದ್ದರು.

ಮಹಿಳಾ ಮೀಸಲು ಸ್ಥಾನದ ಎರಡು ಸ್ಥಾನಗಳಿಗೆ ನಾಲ್ಕು ಮಂದಿ ಸ್ಪರ್ಧಿಸಿದ್ದು, ಪರಿವಾರ ಎಸ್. ಕವಿತ 306, ಅಂಬೆಕಲ್ಲು ಸುಶೀಲ ಕುಶಾಲಪ್ಪ 301 ಮತಗಳನ್ನು ಪಡೆದು ಗೆಲುವು ಕಂಡರು. ಪರಾಜಿತರಾದ ಯಾಲದಾಳು ಸಾವಿತ್ರಿ 234, ಹೆಚ್.ಡಿ. ಹೇಮಂತ ಕುಮಾರಿ 219 ಮತಗಳನ್ನು ಪಡೆದರು. ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರದಿಂದ ಬೊಳ್ಳು ಎ. ಹೆಚ್. 294 ಮತ ಪಡೆದು ಗೆಲುವು ಕಂಡು, ಹೆಚ್. ಈ ರಾಜು 253 ಮತ ಪಡೆದು ಪರಾಜಿತರಾದರು. ಬಿ.ಸಿ.ಎಂ(ಬಿ) ಕ್ಷೇತ್ರದಿಂದ ಪೇರಿಯನ ಪಿ.ಉದಯ ಕುಮಾರ್ ಹಾಲಿ ನಿರ್ದೇಶರಾಗಿದ್ದ ಅಯ್ಯಣ್ಣ ನಾಮಪತ್ರ ವಾಪಸ್ಸು ಪಡೆದುದರಿಂದ ಅವಿರೋಧವಾಗಿ ಆಯ್ಕೆಯಾದರು.

ಬಿ.ಸಿ.ಎಂ(ಎ) ಕ್ಷೇತ್ರದಿಂದ ಹಾಲಿ ನಿರ್ದೇಶಕ ಬಿದ್ದಿಯಂಡ ಗಣಪತಿ ಹಾಗೂ ಹಾಲಿ ನಿರ್ದೇಶಕ ಬಿ.ಸಿ.ಚೆನ್ನಪ್ಪ ನಾಮ ಪತ್ರ ಸಲ್ಲಿಸಿದ್ದು, ಬಿದ್ದಿಯಂಡ ಗಣಪತಿ ನಾಮಪತ್ರ ವಾಪಸ್ಸು ಪಡೆದಿದ್ದರಿಂದ ಬಿ.ಸಿ. ಚೆನ್ನಪ್ಪ ಅವಿರೋಧ ಆಯ್ಕೆಯಾದರು.