ಮಡಿಕೇರಿ, ನ. 3: ಅಕ್ಟೋಬರ್ 31 ರಂದು ಶಕ್ತಿ ಪತ್ರಿಕೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ಷೇಪ ಎಂದು ಪ್ರಕಟಗೊಂಡ ವರದಿಯ ಬಗ್ಗೆ ನೆಲ್ಲಿಹುದಿಕೇರಿ ನಿವಾಸಿ, ಪಿ.ಸಿ. ಅಚ್ಚಯ್ಯನವರು ಇದು ಸತ್ಯಕ್ಕೆ ದೂರವಾದ ವರದಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಮನೆಗೆ ಹೋಗುವ ರಸ್ತೆಗೆ ನನ್ನ ಸ್ವಂತ ಹಣದಿಂದ ಕಾಂಕ್ರಿಟ್ ಮಾಡಿರುತ್ತೇನೆ’ ಇದರಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರ ಅನುದಾನ ಇರುವುದಿಲ್ಲ; ಶಾಸಕರಿಗೂ ಹಾಗೂ ನನಗೂ ಕೆಟ್ಟ ಹೆಸರು ತರುವ ಉದ್ದೇಶದಿಂದ ಪತ್ರಿಕೆಯಲ್ಲಿ ಕೆಲವರು ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.