ಶನಿವಾರಸಂತೆ, ನ. 3: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಮಠದಕಾಡು ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಲು 34 ಲೀಟರ್ ಬೆಲ್ಲದ ಪುಳಗಂಜಿ ತುಂಬಿದ್ದ 4 ಬಿಂದಿಗೆಗಳನ್ನು ಅಬಕಾರಿ ಇಲಾಖೆ ಯವರು ವಶಪಡಿಸಿಕೊಂಡಿದ್ದಾರೆ.

ಸೋಮವಾರಪೇಟೆ ಅಬಕಾರಿ ಇಲಾಖಾ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳ್ಳಭಟ್ಟಿ ತಯಾರಿಸಲು ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದು, ಶೋಧ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಇಲಾಖೆಯ ಸಬ್‍ಇನ್ಸ್‍ಪೆಕ್ಟರ್ ಅಪೂರ್ವ, ಗಾರ್ಡ್‍ಗಳಾದ ಮಹಾಂತೇಶ್, ಮಹಾದೇವ್ ಗಡ್ಡಿ ಹಾಗೂ ಹಿರಣ್ಣ ಮಾಯಕೇರಿ ಪಾಲ್ಗೊಂಡಿದ್ದರು.