ನಾಪೋಕ್ಲು, ನ. 3: ಅಂಚೆ ಇಲಾಖೆ ನೇತೃತ್ವದಲ್ಲಿ ಕೊಡಗು ಜಿಲ್ಲಾ ಮಟ್ಟದ ಭ್ರಷ್ಟಾಚಾರ ಎಂಬ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸಮೀಪದ ಎಮ್ಮೆಮಾಡು ಗ್ರಾಮದ ಅಂಚೆ ನೌಕರ ಜಾರ್ಜ್ ಮಸ್ಕರೇನಸ್ ಪ್ರಥಮ ಬಹುಮಾನ ಪಡೆದುಕೊಂಡರು. ಅಂಚೆ ಇಲಾಖೆಯ ಅಧೀಕ್ಷಕ ಎ.ಜೆ. ಸೋಮಣ್ಣ ಜಾರ್ಜ್ ಅವರಿಗೆ ಪಾರಿತೋಷಕ ನೀಡಿ ಅಭಿನಂದಿಸಿದರು.