ಚೆಟ್ಟಳ್ಳಿ, ನ. 1: ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ ಕಳೆದ ಹನ್ನೆರಡು ದಿನಗಳಿಂದ “ಪ್ರೀತಿಯ ಪ್ರವಾದಿ” ಆನ್ಲೈನ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಹನ್ನೆರಡು ದಿನಗಳಿಂದ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಧಾರ್ಮಿಕ ವಿದ್ವಾಂಸರು ಹಾಗೂ ಪಂಡಿತರು ಪಾಲ್ಗೊಂಡಿದ್ದರು.

ಮುಖ್ಯ ಭಾಷಣಗಾರರಾಗಿ ಜುಮಾ ಮಸೀದಿ ವೀರಾಜಪೇಟೆಯ ಧರ್ಮ ಗುರು ಅಬ್ದುಸ್ಸಲಾಂ ಫೈಝಿ ಎಡಪ್ಪಾಲ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಉಪಾಧ್ಯಕ್ಷ ಝೈನುದ್ಧೀನ್ ಉಸ್ತಾದ್ ವಹಿಸಿದ್ದರು. ಎಸ್.ಕೆ .ಎಸ್ ಎಸ್.ಎಫ್ ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಸಿಸಿ ಕೊಡಗು ದಹ್ವಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಬಾಖವಿ, ಜಿಸಿಸಿ ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಎಸ್.ಕೆ .ಎಸ್ ಎಸ್.ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಹೈಬ್ ಫೈಝಿ, ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಷ ಶಂಸಿ ಪಾಲ್ಗೊಂಡಿದ್ದರು.

ಸಮಾರೋಪ ಪ್ರಾರ್ಥನೆಯನ್ನು ಉಬೈದುಲ್ಲಾ ತಂಙಳ್ ಮೇಲಾಟೂರ್ ಅಧ್ಯಕ್ಷರು- ಎಸ್.ಐ.ಸಿ ಸೌದಿ ರಾಷ್ಟ್ರೀಯ ಸಮಿತಿ ಇವರು ನೆರವೇರಿಸಿದರು. ಆಬಿದ್ ಕಣ್ಣೂರ್ ಪ್ರವಾದಿಯವರ ಬಗ್ಗೆ ಗೀತೆಯನ್ನು ಹಾಡಿದರು.

ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ಸ್ವಾಗತಿಸಿದರು. ಎಸ್.ಕೆ .ಎಸ್ ಎಸ್.ಎಫ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ಲ, ಮಾಧ್ಯಮ ವಿಭಾಗದ ಅಧ್ಯಕ್ಷ ಶಫೀಕ್, ಸದಸ್ಯರುಗಳಾದ ರಶೀದ್, ಬಶೀರ್, ಕಮರುದ್ದೀನ್, ಅಶ್ಫಾಕ್ ಹಾಗೂ ಜಿಸಿಸಿ ಉಪಾಧ್ಯಕ್ಷ ಅಬ್ದುಲ್ ರಝಾಕ್ ಭಾಗವಹಿಸಿದ್ದರು.