*ಸಿದ್ದಾಪುರ, ಅ. 30: ನೆಲ್ಲಿಹುದಿಕೇರಿಯ ಬೆಟ್ಟದಕಾಡು ವ್ಯಾಪ್ತಿಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದರೂ ಬಿಜೆಪಿ ಪ್ರಮುಖ ಪಿ.ಸಿ. ಅಚ್ಚಯ್ಯ ಅವರ ತೋಟಕ್ಕೆ ತೆರಳಲು ರಸ್ತೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಬಿಜೆಪಿಯ ರಾಮು, ಗಣೇಶ್, ಲಕ್ಷ್ಮಣ, ಲಿಂಗಂ, ಪಿ.ಎನ್. ಸುರೇಶ್, ಪಳನಿಸ್ವಾಮಿ, ಜಯಂತ್, ಮಹೇಶ್, ಮನು ಮತ್ತಿತರರು ತಕ್ಷಣ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಅನುಕೂಲಕ್ಕಾಗಿ ರಸ್ತೆ ನಿರ್ಮಿಸಿಕೊಡದ ಶಾಸಕರು ಒಬ್ಬ ವ್ಯಕ್ತಿಯ ತೋಟಕ್ಕೆ ರಸ್ತೆ ನಿರ್ಮಾಣ ಮಾಡಲು ಅನುಮೋದನೆ ನೀಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣದ ಅನುದಾನವನ್ನು ತಕ್ಷಣ ಗ್ರಾಮಸ್ಥರ ರಸ್ತೆಗಳ ದುರಸ್ತಿಗೆ ವಿನಿಯೋಗಿಸಬೇಕೆಂದು ಆಗ್ರಹಿಸಿದ್ದಾರೆ.