ಶನಿವಾರಸಂತೆ, ಅ. 30: ಶನಿವಾರಸಂತೆ ಪಟ್ಟಣದಲ್ಲಿರುವ ವೈನ್‍ಶಾಪ್, ಬಾರ್‍ಗಳು ಹಾಗೂ ವರ್ಕ್‍ಶಾಪ್‍ಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರುಗಳನ್ನು ಪತ್ತೆ ಮಾಡುವ ಬಗ್ಗೆ ಮಡಿಕೇರಿಯ ಕಾರ್ಮಿಕ ಅಧಿಕಾರಿ ಶನಿವಾರಸಂತೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಕುಶಾಲನಗರ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ದಾಳಿ ನಡೆಸಿ, ಮಾಲೀಕರುಗಳಿಗೆ ತಿಳುವಳಿಕೆ ನೀಡಿದ್ದಾರೆ.

ಹಿರಿಯ ಕಾರ್ಮಿಕಾಧಿಕಾರಿ ಲೀನಾ, ಶನಿವಾರಸಂತೆ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ರವಿಚಂದ್ರ, ಪೂರ್ಣಿಮ ಹಾಗೂ ಕುಶಾಲನಗರದ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.