ಕೂಡಿಗೆ, ಅ. 29: ಹಾರಂಗಿ ಅಣೆಕಟ್ಟೆಯ ಮುಂಭಾಗದ ಉದ್ಯಾನವನದ ಪ್ರಗತಿಗೆ ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಪ್ರವಾಸಿಗರಿಗೆ ಹೊಸ ಹೊಸ ಯೋಜನೆಗಳನ್ನು ನೀರಾವರಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಅಣೆಕಟ್ಟೆಯ ಎಡಭಾಗದಲ್ಲಿರುವ ಉದ್ಯಾನವನದ ಹೂವಿನ ತೋಟವನ್ನು ಅಧುನೀಕರಣಗೊಳಿಸಲಾಗುತ್ತಿದೆ ಅಲ್ಲದೆ ಅಣೆಕಟ್ಟೆಯ ಮುಂಭಾಗದ ನದಿ ಅಂಚಿನಲ್ಲಿ ತಡೆಗೊಡೆಯನ್ನು ಕಟ್ಟಲು ಶಾಸಕರ ಸೂಚನೆ ಮೇರೆಗೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಮಾಡಲು ಸಿದ್ಧತೆಯನ್ನು ನಡೆಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಸ್ಥಗಿತ ಗೊಳಿಸಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹಾರಂಗಿಗೆ ಬರುತ್ತಿದ್ದಾರೆ. ಉದ್ಯಾನವನದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು.