ಶನಿವಾರಸಂತೆ, ಅ. 29: ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ವಿಜಯದಶಮಿ ಪ್ರಯುಕ್ತ ದೇವಿಗೆ ಬೆಳ್ಳಿಯ ಕವಚ ಧಾರಣೆಯೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ನವರಾತ್ರ್ಯೋತ್ಸವದ ಮೊದಲ ದಿನ ಸ್ಥಾಪಿಸಿದ್ದ ಕಲಶ ದೀಪವನ್ನು ವಿಜಯದಶಮಿ ದಿನ ವಿಸರ್ಜಿಸಲಾಯಿತು. ಸಂಜೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಪ್ರಾಂಗಣೋತ್ಸವದೊಂದಿಗೆ ನವರಾತ್ರಿಯ ವ್ರತಾಚರಣೆ, ಪೂಜಾ ಕೈಂಕರ್ಯ ಸಂಪನ್ನವಾಯಿತು.

ಅರ್ಚಕ ಮಹಾಬಲ ಜೋಶಿ ಪೂಜಾ ವಿಧಿಗಳನ್ನು ನೆರವೇರಿಸಿದರು. ವಿರಳ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಮಾಡಿದರು. ದೇವಾಲಯ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.