ಕೂಡಿಗೆ, ಅ. 26: ಇಲ್ಲಿಗೆ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನವರಾತ್ರಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ನವರಾತ್ರಿಯ 9 ದಿನಗಳ ಪೂಜಾ ಕಾರ್ಯದಲ್ಲಿ ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಿದ್ದಲಿಂಗಪುರದ ಬೋಜಮ್ಮ ಮತ್ತು ನಾಪಂಡ ಮುದ್ದಪ್ಪ ಮತ್ತು ಮುತ್ತಪ್ಪನವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಪ್ರಸಾದ ವಿನಿಯೋಗ ಮತ್ತು ಅನ್ನದಾನ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯವನ್ನು ಉಡುಪ ಜಗದೀಶ್ ನೆರವೇರಿಸಿದರು.