ಸೋಮವಾರಪೇಟೆ, ಅ. 26: ಪಟ್ಟಣದ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿಯ ವಿಶೇಷವಾಗಿ ಗೊಂಬೆಗಳನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಕಳೆದ 30 ವರ್ಷಗಳಿಂದ ಶಾರದ ಶಂಕರಪ್ಪ ಅವರು ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳು ಹಾಗೂ ನವದುರ್ಗೆಯರ ಮೂರ್ತಿಗಳನ್ನಿರಿಸಿ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದು, 9 ದಿನಗಳು ವಿಶೇಷ ಪೂಜೆ ನಡೆಸುತ್ತಾರೆ.