ಸೋಮವಾರಪೇಟೆ, ಅ.26: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ಗೋವುಗಳ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.

ಸೂರ್ಲಬ್ಬಿ ನಾಡಿನ ಕುಂಬಾರಗಡಿಗೆ ಗ್ರಾಮದ ಕನ್ನಿಕಂಡ ಎಂ. ಬಿದ್ದಪ್ಪ ಅವರು ಜಾನುವಾರುಗಳನ್ನು ಮಂಕ್ಯ ಗ್ರಾಮದ ಮೇದುರ ಕುಶಾಲಪ್ಪ ಅವರ ಮನೆಯ ಹತ್ತಿರದ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದರು. ಈ ಜಾನುವಾರುಗಳು ಬೆಳಿಗ್ಗೆ ಕಾಣೆಯಾಗಿದ್ದು, ಹುಡುಕಾಟ ನಡೆಸಿದ ಸಂದರ್ಭ ಒಂದು ಕಿಲೋಮೀಟರ್ ದೂರದಲ್ಲಿ ಗೋ ಕಳ್ಳರು ಜಾನುವಾರುಗಳನ್ನು ಕಟ್ಟಿ ಹಾಕಿರುವದು ಕಂಡುಬಂದಿದೆ.

ಕೊಟ್ಟಿಗೆಯಿಂದ ಕಳವು ಮಾಡಿದ ಗೋವುಗಳನ್ನು ಮಾರಾಟ ಮಾಡುವ ಯತ್ನ ವಿಫಲವಾಗಿದ್ದು, ವಾಹನದಲ್ಲಿ ಸಾಗಿಸಲು ಅಸಾಧ್ಯವಾದ ಹಿನ್ನೆಲೆ ಕಂಬಕ್ಕೆ ಕಟ್ಟಿಹಾಕಿ ಗೋ ಕಳ್ಳರು ಸ್ಥಳದಿಂದ ಪರಾರಿಯಾಗಿರಬಹುದು ಎನ್ನಲಾಗಿದೆ.