ಶನಿವಾರಸಂತೆ, ಅ. 24: ಸಮೀಪದ ಕೊಡ್ಲಿಪೇಟೆ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಆಡಳಿತ ಮಂಡಳಿ ವತಿಯಿಂದ ಶರನ್ನವರಾತ್ರಿ ಪ್ರಯುಕ್ತ ಪ್ರತಿನಿತ್ಯ ದುರ್ಗಾರಾಧನೆ ನಡೆಯುತ್ತಿದೆ. 6ನೇ ದಿನ ದೇವಿಗೆ ಸ್ಕಂದ ಮಾತಾ ವಿಶೇಷ ಅಲಂಕಾರ ಮಾಡಿ, ಪೂಜಾವಿಧಿ ನೆರವೇರಿಸಲಾಯಿತು. ಸೀಮಿತ ಸಂಖ್ಯೆಯ ಭಕ್ತರು, ಅರ್ಚಕ ಮಹಾಬಲ ಜೋಷಿ, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.