ಸೋಮವಾರಪೇಟೆ, ಅ. 24: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯ, ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಶರನ್ನವ ಉತ್ಸವದಲ್ಲಿ ಶಕ್ತಿ ಪಾರ್ವತಿಗೆ ಕುಂಕುಮ ಅಲಂಕಾರ ಹಾಗೂ ವಿವಿಧ ಪೂಜೆಗಳು ನಡೆಯಿತು.

ಸೋಮೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ನೇತೃತ್ವದಲ್ಲಿ ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ರಾಜೇಶ್ ಪದ್ಮನಾಭ, ದೇವಿ ಬಳಗದ ಅಧ್ಯಕ್ಷೆ ಪ್ರೇಮಾ ಮತ್ತಿತರರು ಇದ್ದರು.

ಶ್ರೀ ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಹಬ್ಬದ ಪ್ರಯುಕ್ತ ಶಕ್ತಿ ಪಾರ್ವತಿಗೆ ಸ್ಕಂದಮಾತಾ ಅಲಂಕಾರ ಮಾಡುವುದರೊಂದಿಗೆ ಅರ್ಚಕ ಮಿಥುನ್ ಶಾಸ್ತ್ರಿ ನೇತೃತ್ವದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.