ಮಡಿಕೇರಿ, ಅ. 22: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಸಂಸ್ಥೆಯಾದ ವೀರಾಜಪೇಟೆಯ ಸರ್ವೋದಯ ಕಾಲೇಜ್ ಆಫ್ ಎಜುಕೇಶನ್ ವತಿಯಿಂದ ಐಕ್ಯುಎಸಿ ಆಯೋಜಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವು ವೆಬಿನಾರ್ ಮೂಲಕ ತಾ. 23 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.

‘ಕಾನೂನು ಬದ್ಧವಾಗಿ ಮತ್ತು ಸಾಮಾಜಿಕವಾಗಿ ಲಿಂಗ ನ್ಯಾಯವನ್ನು ಖಾತರಿಪಡಿಸುವ ಮಾರ್ಗಗಳು’ ಎಂಬ ವಿಷಯದ ಮೇಲೆ ವಕೀಲ ಬಿ.ಬಿ. ಮಾದಪ್ಪ ಅವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಸರ್ವೋದಯ ಕಾಲೇಜ್ ಆಫ್ ಎಜುಕೇಶನ್ ಸಂಸ್ಥೆಯ ಪ್ರಾಂಶುಪಾಲೆ ಡಾ. ಎಂ. ವಾಣಿ ತಿಳಿಸಿದ್ದಾರೆ.