ಚೆಟ್ಟಳ್ಳಿ, ಅ. 21: ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ. ಅ) ಅವರ ಜನ್ಮದಿನದ ಅಂಗವಾಗಿ ಎಸ್.ಕೆ .ಎಸ್.ಎಸ್.ಎಫ್. ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ "ಪ್ರೀತಿಯ ಪ್ರವಾದಿ" ಎಂಬ ಆನ್‍ಲೈನ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.

ಹನ್ನೆರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರವಾದಿಯವರ ಜೀವನದ ಸಮಗ್ರ ಹಾಗೂ ಸಂಪೂರ್ಣ ವಿಷಯಗಳ ನ್ನೊಳಗೊಂಡ ಧಾರ್ಮಿಕ ತರಗತಿಗಳು, ಭಾಷಣ, ಪ್ರವಾದಿ ಕೀರ್ತನೆಗಳು ಹಾಗೂ ಹತ್ತು ಹಲವು ವಿಧಗಳಲ್ಲಿ ಪ್ರತಿದಿನ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಧಾರ್ಮಿಕ ವಿದ್ವಾಂಸರು ಹಾಗೂ ಪಂಡಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮವನ್ನು ಸಯ್ಯಿದ್ ಶಮೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕೇರಳ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್. ಎಸ್.ಎಫ್. ಜಿಸಿಸಿ ಕೊಡಗು ಅಧ್ಯಕ್ಷ ಹುಸೈನ್ ಫೈಝಿ ವಹಿಸಿದ್ದರು. ಜಿಸಿಸಿ ಕೊಡಗು ದಹ್ವಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಬಾಖವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಎಸ್.ಕೆ .ಎಸ್.ಎಸ್.ಎಫ್. ಕೊಡಗು ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಜಿಸಿಸಿ ಉಪಾಧ್ಯಕ್ಷ ಝೈನುದ್ಧೀನ್ ಉಸ್ತಾದ್, ಮಾಧ್ಯಮ ವಿಭಾಗದ ಅಧ್ಯಕ್ಷ ಶಫೀಕ್ ನೆಲ್ಲಿಹುದಿಕೇರಿ, ಸಂಚಾಲಕ ಯಹ್ಯಾ ಕೊಡ್ಲಿಪೇಟೆ, ಸದಸ್ಯರುಗಳಾದ ರಶೀದ್ ಇ.ಪಿ. ತ್ಯಾಗತ್ತೂರ್, ಬಶೀರ್ ಚೇರಂಬಾಣೆ, ಕಮರುದ್ದೀನ್ ವೀರಾಜಪೇಟೆ, ಜಿಸಿಸಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ವೀರಾಜಪೇಟೆ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಜೆಗುಂಡಿ ಹಾಗೂ ಇತರರು ಇದ್ದರು.