ಮಡಿಕೇರಿ, ಅ. 20: ಜೀವಿತಾವಧಿಯಲ್ಲಿ 100 ವರ್ಷಗಳನ್ನು ಪೂರೈಸಿರುವ ಬಿರುನಾಣಿ ಗ್ರಾಮದ ಹಿರಿಯರಾದ ಶತಾಯುಷಿ ಕರ್ತಮಾಡ ಅಕ್ಕಮ್ಮ ಭೀಮಯ್ಯ ಅವರನ್ನು ಕುಟುಂಬಸ್ಥರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಕಾವೇರಿ ಸಂಕ್ರಮಣದ ಅಂಗವಾಗಿ ಕುಟುಂಬದ ಕೈಮಡದಲ್ಲಿ ನಡೆದ ಗುರು ಹಿರಿಯರ ಸ್ಮರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಶತಾಯುಷಿ ಅಕ್ಕಮ್ಮ ಅವರನ್ನು ಗೌರವಿಸಲಾಯಿತು. ಕರ್ತಮಾಡ ಕುಟುಂಬದ ಅಧ್ಯಕ್ಷ ಚುಚ್ಚಮಾದಪ್ಪ ಸೇರಿದಂತೆ ಆಡಳಿತ ಮಂಡಳಿ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.