ಕುಶಾಲನಗರ, ಅ. 16: ಬೈಚನಹಳ್ಳಿಯ ಗೆಳೆಯರ ಬಳಗದ ಅಶ್ರಯದಲ್ಲಿ ಕಳೆದ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬೈಚನಹಳ್ಳಿ ಅಂಗನವಾಡಿ ಶಿಕ್ಷಕಿ ಶಾರದಾ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಪ.ಪಂ. ಸದಸ್ಯರಾದ ಎಂ.ಬಿ. ಸುರೇಶ್, ಅಮೃತ್‍ರಾಜ್, ಜಯವರ್ಧನ್, ಜಯಲಕ್ಷ್ಮಿ, ಬಿ.ಎಲ್. ಜಗದೀಶ್, ಡಿ.ಕೆ. ತಿಮ್ಮಪ್ಪ, ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್, ಕಿರಿಯ ಆರೋಗ್ಯ ಸಹಾಯಕಿ ಸುಶೀಲಾ, ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್, ಶಿವುಕುಮಾರ್, ವಿನೀತ್ ಮತ್ತಿತರರು ಇದ್ದರು.

ಶಾರದ ಅವರನ್ನು ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು ಪ್ರತ್ಯೇಕವಾಗಿ ಸನ್ಮಾನಿಸಿ, ಗೌರವಿಸಿ, ಬೀಳ್ಕೊಟ್ಟರು.