ಸುಂಟಿಕೊಪ್ಪ, ಅ. 17: ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಬ್ಬದ ಹಸುವೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ರಸ್ತೆ ಬದಿಯಲ್ಲಿ ಹಸು ಪ್ರಾಣ ಕಳೆದುಕೊಂಡು ಬಿದ್ದಿದೆ. ನಂತರ ಈ ಹಸುವಿನ ವಾರಸುದಾರರು ಯಾರು ಎಂದು ತಿಳಿಯದೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ನೋಡಲ್ ಅಧಿಕಾರಿ ನೆಹರು, ಸಿಬ್ಬಂದಿ ಧÀನಂಜಯ ಸೇರಿ ಜೆಸಿಬಿ ಮೂಲಕ ಗುಂಡಿ ತೆಗೆದು ಅಂತ್ಯ ಸಂಸ್ಕಾರ ನೆÀರವೇರಿಸಿದರು.