ಸುಂಟಿಕೊಪ್ಪ, ಅ. 9: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 25,000ವನ್ನು ಬೆಂಗಳೂರಿನಲ್ಲಿ ನೆಲೆಸಿರುವ ಎ.ಪಿ. ಉದಯಕುಮಾರ್ ಹಾಗೂ ವೇದಾವತಿ ಕುಟುಂಬದವರು ನೀಡಿದ್ದಾರೆ. ದೇವಸ್ಥಾನದ ಜೀರ್ಣೊದ್ಧಾರ ಸಮಿತಿಯ ಪದಾಧಿಕಾರಿಗಳಾದ ಕೆ.ಪಿ. ಜಗನ್ನಾಥ್, ಜೆ.ಎನ್. ಚಂದ್ರಶೇಖರ್, ಪಟ್ಟೆಮನೆ ಉದಯಕುಮಾರ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರಾದ ಮಂಜುನಾಥ್ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನದ ಪೂಜಾರಿ ಶಿವರಾಮ್ (ಶಿವಮಣಿ) ಅವರಿಗೆ ಹಸ್ತಾಂತರಿಸಲಾಯಿತು.