ಗೋಣಿಕೊಪ್ಪ ವರದಿ, ಅ. 5: ಬೈಕ್ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಸಾವಿಗೀಡಾಗಿದ್ದಾನೆ.

ಕಿರುಗೂರು ಗ್ರಾಮದ ನಾಗರಾಜು ಎಂಬುವವರ ಪುತ್ರ ಎಚ್. ಎನ್. ಸಂದೀಪ್ (19) ಮೃತ ಸವಾರ. ಶನಿವಾರ ರಾತ್ರಿ ಗೋಣಿಕೊಪ್ಪ ಕಡೆಯಿಂದ ಕಿರುಗೂರು ಕಡೆಗೆ ಬೈಕ್ ಚಾಲಿಸಿಕೊಂಡು ತೆರಳುತ್ತಿದ್ದಾಗ ಜೋಡುಬೀಟಿ ಎಂಬಲ್ಲಿ ಬೈಕ್ ಅವಘಡಗೊಂಡು ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ನಂತರ ಆತನನ್ನು ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾನೆ. ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.