ಏನಾದರೂ ತೊಂದರೆ ಇದ್ದರೆ ನನ್ನ ಈಮೈಲ್([email protected]) ವಿಳಾಸಕ್ಕೆ ಸಂದೇಶ ಕಳಿಸಿ, ಹಾಗೇ ಉಪಯೋಗವಾದರೂ ಸಂತಸವನ್ನು ಹಂಚಿಕೊಳ್ಳಿ :)

ಸುಂಟಿಕೊಪ್ಪ, ಅ. 1: ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ಬಳಿ ಕಾರು ಹಾಗೂ ಬೈಕ್‍ವೊಂದರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಈ ವೇಳೆ ಗರಗಂದೂರು ಬಳಿಯ ಲಕ್ಕೇರಿ ನಿವಾಸಿ ನಿತಿನ್ (16) ಎಂಬಾತ ಬೈಕ್ ಹಿಂಬದಿಯಲ್ಲಿ ಕುಳಿತಿದ್ದು, ಮಾರಣಾಂತಿಕ ಗಾಯ ಗೊಂಡು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದಿದ್ದಾರೆ.

ಮಾದಾಪುರದ ನಿವಾಸಿ ಶಿವಕುಮಾರ್ ಎಂಬವರು ಚಾಲಿಸು ತ್ತಿದ್ದ ಕಾರು ಹಾಗೂ ಗರಗಂದೂರು ಲಕ್ಕೇರಿ ನಿವಾಸಿ ಸುರೇಶ್ ಚಲಿಸುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂದರ್ಭ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆಯೊಂದಿಗೆ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.