ಸುಂಟಿಕೊಪ್ಪ, ಸೆ. 28: ಇಲ್ಲಿನ ಶ್ರೀ ರಾಮ ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಸುಂಟಿಕೊಪ್ಪ ವರ್ತಕರ ಸಂಘದ ಮಾಜಿ ಅಧ್ಯಕ್ಷ ಆಗಿದ್ದ ಆರ್. ಸುದರ್ಶನ್ ನಾಯ್ಡು ಇತ್ತೀಚಿಗೆ ನಿಧನರಾಗಿದ್ದು, ಇವರ ನಿಧನಕ್ಕೆ ಶಾಂತಿ ಕೋರುವ ಸಲುವಾಗಿ ನಗರ ವರ್ತಕರ ಸಂಘದ ಸ್ಥಾನೀಯ ಸಮಿತಿ ವತಿಯಿಂದ ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ್ಪದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆÀ ಮಾಡಲಾಯಿತು. ಈ ಸಂದರ್ಭ ಸುಂಟಿಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಡಿ. ನರಸಿಂಹ, ನಿರ್ದೇಶಕರಾದ ಎಸ್.ಜಿ. ಶ್ರೀನಿವಾಸ್, ಕೆ.ಡಿ. ರಾಮಯ್ಯ, ಎಂ.ಎ. ವಸಂತ, ವಹೀದ್‍ಜಾನ್, ವಿ.ಎ. ಸಂತೋಷ್, ಜಗದೀಶ್ ರೈ, ಜೆ.ಎನ್. ಚಂದ್ರಶೇಖರ್, ಟಿ.ಕೆ. ರಾಜೀವ್, ವರ್ತಕರ ಸಂಘದ ಸ್ಥಾನೀಯ ಸಮಿತಿ ಉಪಾಧ್ಯಕ್ಷೆ ಶೀಲಾವತಿ ಬೋಪಣ್ಣ, ಕಾರ್ಯದರ್ಶಿ ಗಂಗಾಧರ್ ರೈ, ಸಹ ಕಾರ್ಯದರ್ಶಿ ರಾಜು ರೈ, ಸಮಿತಿ ಸದಸ್ಯರು ಹಾಜರಿದ್ದರು.