ಕುಶಾಲನಗರ, ಸೆ. 28: ಇಲ್ಲಿನ ಆಟೋ ಚಾಲಕರು ಮಾಲೀಕರ ಸಂಘದ ಪ್ರಭಾರ ಅಧ್ಯಕ್ಷರಾಗಿ ಆರ್.ಮೋಹನ್ ಆಯ್ಕೆಗೊಂಡಿದ್ದಾರೆ.

ಸಂಘದ ಕಚೇರಿಯಲ್ಲಿ ಗೌರವ ಅಧ್ಯಕ್ಷರುಗಳಾದ ವಿ.ಪಿ. ನಾಗೇಶ್ ಮತ್ತು ಎಂ.ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾತ್ಕಾಲಿಕ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಗೊಳಿಸಲಾಯಿತು. ಉಪಾಧ್ಯಕ್ಷ ರಾಗಿ ಕೃಷ್ಣಕಿಟ್ಟಿ ಹಾಗೂ ದೇವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕುಮಾರ್, ಖಜಾಂಚಿಯಾಗಿ ರಮೇಶ್, ಕಾರ್ಯದರ್ಶಿಯಾಗಿ ಅಬ್ದುಲ್ ಸಾದಿಕ, ಸಹ ಕಾರ್ಯದರ್ಶಿಯಾಗಿ ಗಿರಿಪ್ರಸಾದ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ಸಂಘವನ್ನು ನೋಂದಣಿಗೊಳಿಸುವ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ಟಿ.ಯೋಗೇಶ್, ಮಹೇಶ್, ಆರ್.ಚಂದ್ರು, ಸಂಚಾಲಕ ಶಶಿಕುಮಾರ್, ಪ್ರಮುಖರಾದ ಕೆ.ಜಿ.ಕೃಷ್ಣ ಮತ್ತಿತರರು ಇದ್ದರು.