ಸೋಮವಾರಪೇಟೆ, ಸೆ. 23: ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮೀಪದ ಆಲೇಕಟ್ಟೆ ಭಾರತೀಯ ಯುವಕ ಸಂಘದ ಸಭಾಂಗಣದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಬಿಎಂಎಸ್ ಶ್ರಮಿಕ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ರಾಜ್ಯ ಉಪಾಧ್ಯಕ್ಷ ಇಂದ್ರೇಶ್ ಮಾತನಾಡಿ, ವಿಶ್ವಕರ್ಮ ದಿನಾಚರಣೆಯ ಮಹತ್ವ, ಕಾರ್ಮಿಕ ಸಂಘಟನೆ ರಚನೆಯ ಅವಶ್ಯಕತೆ, ಸಾಮಾಜಿಕ ಭದ್ರತೆ -ಸುರಕ್ಷತೆ, ಕಾರ್ಮಿಕರ ಹಕ್ಕುಗಳ ಬಗ್ಗೆ ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬಿಎಂಎಸ್ ಪದಾಧಿಕಾರಿ ಯೋಗೇಂದ್ರ, ಜಿಲ್ಲಾಧ್ಯಕ್ಷ ಸತೀಶ್, ತಾಲೂಕು ಬಿಎಂಎಸ್ ಅಧ್ಯಕ್ಷ ಮೋಹನ್, ಜಿಲ್ಲಾ ಕಾರ್ಯದರ್ಶಿ ಯೋಗಾನಂದ, ತಾಲೂಕು ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಗಣೇಶ್, ಮುಖಂಡರಾದ ಶಶಿ, ಅನೀಶ್, ಮೂರ್ತಿ, ಶಶಿ ಅಚ್ಚ್ಯುತ್ತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಚೇರಿ ಉದ್ಘಾಟನೆ: ನಂತರ ಸೋಮವಾರಪೇಟೆಯ ವಿಎಸ್‍ಎಸ್‍ಎನ್ ಕಟ್ಟಡದಲ್ಲಿ ನೂತನವಾಗಿ ತೆರೆಯಲಾಗಿರುವ ಕೊಡಗು ಜಿಲ್ಲಾ ಭಾರತೀಯ ಮಜ್ದೂರ್ ಸಂಘದ ಕಚೇರಿಯನ್ನು ಉದ್ಘಾಟಿಸಲಾಯಿತು. ಆರ್.ಎಸ್.ಎಸ್. ಬೌದ್ಧಿಕ್ ಪ್ರಮುಖರಾದ ಪದ್ಮನಾಭ್ ಅವರು ಬಿಎಂಎಸ್ ಸ್ಥಾಪನೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.