ಮಡಿಕೇರಿ, ಸೆ. 6: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ರಾಜರಾಜೇಶ್ವರಿ ಶಾಲೆಯಲ್ಲಿ ವನ ಮಹೋತ್ಸವ ಆಯೋಜಿಸಲಾಗಿತ್ತು. ರೋಟರಿ ಜಿಲ್ಲಾ ಯೋಜನೆಯಂತೆ 100 ಸಸಿಗಳನ್ನು ನೆಡಲಾಯಿತು.

ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಟಿ. ಗಣಪತಿ, ಕಾರ್ಯದರ್ಶಿ ಗೀತಾಗಿರೀಶ್, ನಿರ್ದೇಶಕರಾದ ಲಲಿತಾ ರಾಘವನ್, ಸಲೀಲ ಪಾಟ್ಕರ್, ಅನಿಲ್ ಕೃಷ್ಣಾನಿ, ಪಾರ್ಥ ಚೆಂಗಪ್ಪ, ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ್, ಶಾಲೆಯ ಶಿಕ್ಷಕ ವೃಂದ ಶಾಲಾ ಆವರಣದಲ್ಲಿ ಜರುಗಿದ ವನಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.