*ಕೊಡ್ಲಿಪೇಟೆ, ಆ.29: ರಂಭಾಪುರಿ ವೀರ ಸಿಂಹಾಸನಾಧೀಶ್ವರರಾದ ಬಾಳೆಹೊನ್ನೂರು ಶ್ರೀ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ದೇಶೀಕೇಂದ್ರ ಭಗವತ್ಪಾದರು ಕಾರ್ಯಕ್ರಮ ನಿಮಿತ್ತ ಕೊಡ್ಲಿಪೇಟೆ ಮೂಲಕ ಹೋಗುವಾಗ ಸ್ಥಳೀಯ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರಶಾಸ್ತ್ರಿಗಳ ನಿವಾಸಕ್ಕೆ ಆಗಮಿಸಿದ್ದರು.

ಈ ಸಂದರ್ಭ ಸೋಮಶೇಖರ ಶಾಸ್ತ್ರೀಗಳ ಕುಟುಂಬಸ್ಥರು ಪೂಜ್ಯರ ಪಾದ ಪೂಜೆ ನೆರವೇರಿಸಿದರು. ಸ್ಥಳೀಯ ಭಕ್ತಾದಿಗಳು ಆಗಮಿಸಿ ಆಶೀರ್ವಾದ ಪಡೆದರು.

ಷಟಸ್ಥಲ ಬ್ರಹ್ಮ ಶಂಭುಲಿಂಗ ಶ್ರೀ ಶಿವಾಚಾರ್ಯ ಮಹಾಸ್ವಾಮೀಜಿ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.