ಸೋಮವಾರಪೇಟೆ, ಆ. 28: ಜಿಲ್ಲಾ ದಲಿತ ಹಿತ ರಕ್ಷಣಾ ಒಕ್ಕೂಟದ ಜಿಲ್ಲಾ ಸಮಿತಿಯ ವಾರ್ಷಿಕ ಸಭೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಒಕ್ಕೂಟವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಇದರೊಂದಿಗೆ ಪ್ರತಿ ತಿಂಗಳು ಒಕ್ಕೂಟದ ಸಭೆ ನಡೆಸಬೇಕು. ದಲಿತರ ಹಿತ ಕಾಯಲು ಯೋಜನೆಗಳನ್ನು ಹಾಕಿಕೊಳ್ಳಬೇಕೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಜಯಪ್ಪ ಹಾನಗಲ್, ಕಾನೂನು ಸಲಹೆಗಾರ ಬಿ.ಈ. ಜಯೇಂದ್ರ, ಪದಾಧಿಕಾರಿಗಳಾದ ಎಚ್.ಜೆ. ಜವರ, ಎಚ್.ಎಂ.ಸೋಮಪ್ಪ, ಎಚ್.ಎ. ನಾಗರಾಜು, ಕೆ.ಬಿ. ರಾಜು, ಎಂ.ಪಿ. ಹೊನ್ನಪ್ಪ, ಎಸ್.ಆರ್. ವಸಂತ, ರಾಮಕೃಷ್ಣ, ಸಿ.ಈ. ವೆಂಕಟೇಶ್, ದಯಾನಂದ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.