ಮಡಿಕೇರಿ, ಆ. 28: ಹಿಂದೂ ಆಧ್ಯಾತ್ಮಿಕ ಸೇವಾ ಮೇಳ (ಎಚ್‍ಎಸ್‍ಎಸ್‍ಎಫ್) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ಸಂರಕ್ಷಣೆ ಗತಿವಿಧಿಯ ಸಹಭಾಗಿತ್ವದಲ್ಲಿ ಪ್ರಕೃತಿ ವಂದನಾ ಎಂಬ ವಿಶಿಷÀ್ಟ ಕಾರ್ಯಕ್ರಮ ತಾ. 30 ರಂದು ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ನಡೆಯಲಿದೆ.

ಪ್ರಕೃತಿಯಿಂದಾಗಿ ಸಕಲ ಜೀವರಾಶಿಗಳ ಅಸ್ತಿತ್ವ ಇರುವುದರಿಂದ ಅಂತಹ ಪ್ರಕೃತಿಯನ್ನು ಸ್ಮರಿಸಿ ಅದಕ್ಕೆ ವಂದಿಸುವ ಹಾಗೂ ಪ್ರಕೃತಿಯ ಸಂರಕ್ಷಣೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಈ ಅಭಿಯಾನವು ರಾಷ್ಟ್ರದಾದ್ಯಂತ ಆಯೋಜಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಪರಿಸರ ಸಂರಕ್ಷಣೆ ಗತಿವಿಧಿ ಸಹ ಪ್ರಮುಖ್ ಎಂ.ಬಿ.ಅರುಣ್ ಕುಮಾರ್ ತಿಳಿಸಿದ್ದಾರೆ.

ಗಿಡ, ಮರ, ಜಲ, ಭೂಮಿಯ ಸಂರಕ್ಷಣೆಗಾಗಿ ಶ್ರದ್ಧೆ ಮತ್ತು ಸಮ್ಮಾನದ ಸಂವರ್ಧನೆಯ ಪ್ರತೀಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ನಮ್ಮ ಪ್ರಾಚೀನ ಮೌಲ್ಯಗಳನ್ನು ಪುನಃ ನಮ್ಮ ಸಮಾಜಕ್ಕೆ ನೆನಪಿಸಿ ಮತ್ತೆ ಆ ದಿಶೆಯಲ್ಲಿ ಚಿಂತನೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಕೃತಿ ವಂದನೆ ಸಲ್ಲಿಸುವಂತೆ ಕೋರಲಾಗಿದೆ.

ಓಂಕಾರ ಮೂರು ಬಾರಿ, ವೃಕ್ಷಕ್ಕೆ ತಿಲಕ ಮತ್ತು ಅಕ್ಷತೆ, ಸಂರಕ್ಷಣೆಯ ದ್ಯೋತಕವಾಗಿ ಪವಿತ್ರ ದಾರ ಕಟ್ಟುವುದು, ಜಲ ಪ್ರಧಾನ ಮತ್ತು ಪ್ರತಿದಿನ ನೀರುಣಿಸುವ ಸಂಕಲ್ಪ ಪುಷ್ಪಾರ್ಚನೆ ಮತ್ತು ದೀಪವನ್ನು ಹಚ್ಚಿ ಆರತಿಯನ್ನು ಮಾಡಬೇಕು.

ಪ್ರಕೃತಿ ವಂದನ ಕುರಿತು 10 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮ ತಿತಿತಿ.ಜಿಚಿಛಿebooಞ.ಛಿom/ಃeಟಿgಚಿಟuಡಿu.hssಜಿನಲ್ಲಿ ನೇರ ಪ್ರಸಾರಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಗಣಪತಿ ಹೆಗಡೆ 94489 87819, ಅರುಣ್ ಕುಮಾರ್ 9448464461 ಸಂಪರ್ಕಿಸ ಬಹುದಾಗಿದೆ.