ವೀಣಾ ಅಚ್ಚಯ್ಯ

ಮಡಿಕೇರಿ, ಆ. 27: ಜಿಲ್ಲಾ ಕಾಂಗ್ರೆಸ್‍ಗೆ (ಡಿ.ಸಿ.ಸಿ.) ಬ್ಲಾಕ್ ಕಾಂಗ್ರೆಸ್ ಮೂಲಕ ಪದಾಧಿಕಾರಿಗಳನ್ನು ನೇಮಕ ಮಾಡುವಲ್ಲಿ ಕೆಲವೊಂದು ತಪ್ಪಾಗಿದೆ ಎಂಬ ಅಸಮಾಧಾನ ಹಲವರಲ್ಲಿದೆ. ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಸರಿಪಡಿಸುವ ಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದ್ದಾರೆ.

ತಾ. 21ರ ಪತ್ರಿಕೆಯಲ್ಲಿ, ಪಕ್ಷದಲ್ಲಿ ಬದಲಾವಣೆಯಾಗಲಿದೆ ಎಂಬ ವರದಿ ಪ್ರಕಟವಾಗಿತ್ತು. ವೀರಾಜಪೇಟೆಯಲ್ಲಿ ಕಾಂಗ್ರೆಸ್‍ನಿಂದ ನಡೆದ ಪ್ರತಿಭಟನೆ ಸಂದರ್ಭ ವಲಯ ಕಾಂಗ್ರೆಸ್‍ನ ಪದಾಧಿಕಾರಿಗಳು ಈ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ತಾವು ಪ್ರತಿಕ್ರಿಯಿಸಿದ್ದಾಗಿ ಹೇಳಿರುವ ಅವರು, ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕುರಿತಾಗಲಿ ಅಥವಾ ಅವರ ಬದಲಾವಣೆ ಕುರಿತಾಗಲಿ ಮಾತನಾಡಿರಲಿಲ್ಲ, ಬ್ಲಾಕ್ ಕಾಂಗ್ರೆಸ್‍ನ ಅಸಮಾಧಾನದ ಕುರಿತು ಮಾತ್ರ ಪ್ರಸ್ತಾಪಿಸಿದ್ದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.