ವೀರಾಜಪೇಟೆ, ಆ. 26: ವೀರಾಜಪೇಟೆಯ ಪಂಜರ್‍ಪೇಟೆ ಕೆ. ಜಗದೀಶ್ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ ಕಾವ್ಯ (19) ಎಂಬ ಅವಿವಾಹಿತೆ ಯುವತಿ ಮನೆಯ ಔಟ್‍ಹೌಸ್‍ನ ಬಾತ್‍ರೂಮಿನಲ್ಲಿ ಕುತ್ತಿಗೆಗೆ ವೇಲ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇಲ್ಲಿನ ನಗರ ಪೊಲೀಸರಿಗೆ ದೊರೆತ ದೂರಿನ ಮೇರೆ ಪ್ರಕರಣ ದಾಖಲಿಸಿದ್ದಾರೆ.

ಯುವತಿ ಕಾವ್ಯ ಇಲ್ಲಿನ ಆರ್ಜಿ ಗ್ರಾಮದ ಗಣೇಶ್ ಪೂವಿ ದಂಪತಿಯ ಮಗಳಾಗಿದ್ದು ಕೆಲವು ತಿಂಗಳುಗಳಿಂದ ಮನೆ ಕೆಲಸಕ್ಕಿದ್ದಳೆಂದೂ ಪೊಲೀಸರು ತಿಳಿಸಿದ್ದಾರೆ.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ ನಂತರ ಪೊಲೀಸರು ಪೋಷಕರಿಗೆ ಒಪ್ಪಿಸಿದರು.