ಕೂಡಿಗೆ, ಆ. 25: ಕೂಡಿಗೆಯ ಅಂಜಲಾ ವಿದ್ಯಾನಿಕೇತನ ಶಾಲೆ ವತಿಯಿಂದ ಹೆಬ್ಬಾಲೆ, ಕೂಡುಮಂಗಳೂರು, ವಿಜಯನಗರ, ಕೂಡಿಗೆ ವ್ಯಾಪ್ತಿಯಲ್ಲಿ ಶಾಲೆ ಶಿಕ್ಷಕರ ವೃಂದ ತಂಡ ತಂಡವಾಗಿ ವಿದ್ಯಾರ್ಥಿಗಳ ಸಾಮಾಜಿಕ ಅಂತರ ನಡುವೆ ವಿದ್ಯಾರ್ಥಿಗಳ ಕಲಿಕೆಗೆ ಸಂಬಂಧಿಸಿದ ಬೋಧನಾ ವ್ಯವಸ್ಥೆ ಅರಿವು ಸೇರಿದಂತೆ ಮಕ್ಕಳ ಆರೋಗ್ಯ ತಿಳಿದುಕೊಳ್ಳುವ ಮೂಲಕ ಮನೆ ಮನೆ ತೆರಳಿ ಪಾಠದ ಅರಿವು ಮೂಡಿಸುವ ಕಾರ್ಯ ನಡೆಯಿತು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ವಿಜಯ, ಸಹ ಶಿಕ್ಷಕರಾದ ಹರೀಶ್ ನೀಲಪ್ಪ, ರನೀತಾ, ಅಶಾ, ಜಿಶಾ, ರೀನಾ ಇದ್ದರು.