ವೀರಾಜಪೇಟೆ, ಆ. 25: ಮಂಗಳೂರು ವಿಶ್ವವಿದ್ಯಾಲಯದ ಅಧಿಸೂಚನೆಯ ಪ್ರಕಾರ 2020-21 ಸಾಲಿನ ಬಿ.ಎ. ಬಿ,ಕಾಂ. ಹಾಗೂ ಬಿಬಿಎ ತರಗತಿಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭಗೊಳ್ಳಲಿದೆ ಎಂದು ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲೆ ಎ.ಎಸ್. ಪೂವಮ್ಮ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ 19ರ ಹಿನ್ನೆಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ, ತೃತೀಯ, ಪಂಚಮ, ಸೆಮಿಸ್ಟರ್ ಆನ್‍ಲೈನ್ ತರಗತಿಗಳು ಸೆಪ್ಟೆಂಬರ್ 1 ರಿಂದ ನಡೆಸಲಾಗುವುದು. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಬೇರೆ ಕಾಲೇಜಿನಿಂದ ವರ್ಗಾವಣೆ ಬಯಸುವ ವಿದ್ಯಾರ್ಥಿಗಳು ಸೆಪ್ಟೆಂಬರ್ 25ರ ಒಳಗೆ ವರ್ಗಾವಣೆ ಪಡೆದುಕೊಳ್ಳಬಹುದಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸೆಪ್ಟೆಂಬರ್ 9ರ ಒಳಗೆ ಪ್ರವೇಶ ಪಡೆದುಕೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಕಾಲೇಜಿನ ಅಧೀಕ್ಷಕಿ ಡಿ.ಎಂ. ಲತಾ, ವಾಣಿಜ್ಯ ವಿಭಾಗದ ಡಾ ಆನಂದಕಾರ್ಲ, ಕನ್ನಡ ವಿಭಾಗದ ಪ್ರೊ. ಶಂಕರ್‍ನಾರಾಯಣ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾಗರಾಜ್ ಉಪಸ್ಥಿತರಿದ್ದರು.