ಕೂಡಿಗೆ, ಆ. 23: ಕೂಡಿಗೆ ಗ್ರಾಮ ವ್ಯಾಪ್ತಿಯ ಸೀಗೆಹೂಸೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹುಣಸೆಪಾರೆ ಹಾಡಿಗೆ ಹೋಗುವ ರಸ್ತೆಯು ತೀರಾ ಮಳೆಯಿಂದಾಗಿ ಹಾಳಾಗಿ ಹಾಡಿಯ ಜನರು ಮತ್ತು ಈ ಭಾಗದ ಗ್ರಾಮಸ್ಥರು ತಿರುಗಾಡಲು ಸಾಧ್ಯವಾಗದಷ್ಟು ಕೆಸರುಮಯವಾಗಿತ್ತು.

ಇದನ್ನು ತಿಳಿದ ಸೀಗೆಹೂಸೂರು ಗ್ರಾಮದ ಯುವಕರ ತಂಡದ 25ಕ್ಕೂ ಹೆಚ್ಚು ಮಂದಿ ಕಲ್ಲುಕೊರೆಯಿಂದ ಜಲ್ಲಿಕಲ್ಲು ಪುಡಿಯನ್ನು ತಂದು ಒಂದು ಕಿಲೋಮೀಟರ್ ದೂರದವರೆಗೆ ರಸ್ತೆಗೆ ಹಾಕಿ ಸಮತಟ್ಟು ಪಡಿಸಿದ್ದಾರೆ.ಈ ಕೆಲಸದಲ್ಲಿ ಬೋಮೇಗೌಡನ ಚಿಣ್ಣಪ್ಪ, ಕೊರೆ ಅಪ್ಪಿ, ಗುರುಪ್ರಸಾದ್, ಬಾಲಚಂದ್ರ, ಗಣಪತಿ, ಪೂವಯ್ಯ, ಪ್ರಕಾಶ್, ಹರಿಹರನ್, ಮಿಥುನ್ ಸೇರಿದಂತೆ ಹಾಡಿ ಪ್ರಮುಖರು ಭಾಗವಹಿಸಿದ್ದರು.