ಕೂಡಿಗೆ, ಆ. 23: ಮೈಸೂರಿನ ಅರ್ಗನೈಜೇಷನ್ ಫಾರ್ ದ ಡೆವಲಪ್‍ಮಮೆಂಟ್ ಆಫ್ ಪೀಪಲ್ ಸಂಸ್ಥೆಯ ವತಿಯಿಂದ ಕೂಡುಮಂಗಳೂರು ಗ್ರಾಮದ ಭೂಮಿಕ ರೈತ ಕೂಟದ 30 ಸದಸ್ಯರಿಗೆ ಉಚಿತವಾಗಿ ಗೊಬ್ಬರ ಮತ್ತು ತಿಪಟೂರು ತಳಿಯ ತೆಂಗಿನ ಗಿಡಗಳನ್ನು ಕೂಡುಮಂಗಳೂರು ಸಮುದಾಯ ಭವನದ ಸಭಾಂಗಣದಲ್ಲಿ ವಿತರಣೆ ಮಾಡಲಾಯಿತು

ಕಾರ್ಯಕ್ರಮದ ಉದ್ಘಾಟನೆ ಯನ್ನು ಮೈಸೂರಿನ ಓ ಡಿ ಪಿ ಸಂಸ್ಧೆಯ. ನಿರ್ದೇಶಕರಾದ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ನೆರವೇರಿಸಿದರು. ಸಮುದಾಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಾಂಸ್ಕøತಿಕ ರಾಜಕೀಯ ಮತ್ತು ಆಥಿರ್üಕವಾಗಿ ಹಿಂದುಳಿದ ಬಡ ಜನರ ಶೋಷಿತ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ರೈತ ಕೂಟಗಳನ್ನು ರಚನೆ ಮಾಡಿ ಅವರ. ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಜಾನ್ ಬಿ ರಾಡ್ರಿಗಸ್ ಪ್ರಸ್ತಾವಿಕವಾಗಿ ಮಾತಾನಾಡಿ ಸಂಸ್ಥೆಯ 4 ಜಿಲ್ಲೆಯ. 150 ಹಳ್ಳಿಗಳಲ್ಲಿ ರೈತ ಕೂಟಗಳನ್ನು ರಚನೆ ಮಾಡಿ ,ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಸದಸ್ಯರು ನೊಂದಣಿ ಅಗಿ ಯೋಜನೆ ಸದುಪಯೋಗ ಪಡೆದು ಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಮತ್ತು ಕೊಡಗು ಮಹಿಳೋದಯ ಒಕ್ಕೂಟದ ಸಂಯೋಜಕಾದ ಮೋಲಿ ಪುರ್ಟಾಡೊ ವಲಯ ಸಂಯೋಜಕ ಜೋಯ್ಸಿ ವಿನೇಜೆಸ್ ಭೂಮಿತಾಯಿ ಸಮಿತಿಯ ಅಧ್ಯಕ್ಷ ಹೊನ್ನನ್ನ ಕಾರ್ಯಾಧ್ಯಕ್ಷ ವಿಲಾಸಿನಿ ಕೂಡುಮಂಗಳೂರು ಮಹಿಳಾ ಸಮಾಜದ ಅಧ್ಯಕ್ಷೆ ಶಾರದ ಸಂಸ್ಥೆಯ ಕಾರ್ಯಕರ್ತರಾದ ಮಮತ ಸುಂದರ್ ಉಪಸ್ಥಿತದ್ದರು.