ಕುಶಾಲನಗರ, ಆ. 23: ಗಣೇಶನ ಪೂಜೆ ಮನೆಯಲ್ಲಿ ಸಲ್ಲಿಸುವ ವೇಳೆ ಅತ್ತೂರು ಗ್ರಾಮದಲ್ಲಿ ಮಾತ್ರ ಗಜಪಡೆ ಕಾಡಿನಿಂದ ರಸ್ತೆಗೆ ಬಂದು ಗ್ರಾಮಸ್ಥರಿಗೆ ದರ್ಶನ ನೀಡಿದ ಘಟನೆ ಶನಿವಾರ ಬೆಳಗ್ಗೆ ನಡೆಯಿತು. ಹಾರಂಗಿ ರಸ್ತೆಯ ಅತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಅರಣ್ಯದಿಂದ ಹೊರಬಂದು ರಸ್ತೆ ದಾಟಿ ತೆರಳುತ್ತಿದ್ದ ದೃಶ್ಯ ಗೋಚರಿಸಿತು. ಸ್ಥಳೀಯ ಕೃಷಿಕರು ತಮ್ಮ ಬೆಳೆ ಹಾಳಾಗದಂತೆ ಎಚ್ಚರವಹಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರು.