ಕುಶಾಲನಗರ, ಆ. 21: ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ತಟದಲ್ಲಿರುವ ಮೆಟ್ಟಿಲುಗಳಲ್ಲಿ ತುಂಬಿದ್ದ ಕೆಸರು ಮಣ್ಣನ್ನು ಪಂಚಾಯ್ತಿ ಪೌರಕಾರ್ಮಿಕರು ತೆರವುಗೊಳಿಸಿ ಸ್ವಚ್ಛತೆ ಮಾಡಿದರು. ಇತ್ತೀಚೆಗೆ ಕಾವೇರಿ ನದಿ ತುಂಬಿ ಹರಿದ ಸಂದರ್ಭ ಕಾವೇರಿ ಆರತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪೂರ್ಣ ಕೆಸರು ಆವರಿಸಿದ್ದು ನದಿಗೆ ತೆರಳಲು ಅನಾನುಕೂಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯ್ತಿ ವತಿಯಿಂದ ಕೆಸರು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು.