ಮಡಿಕೇರಿ, ಆ. 15: ಇಂದು ಸಂಜೆ ನಡೆದ ಆನೆ ಧಾಳಿಯಲ್ಲಿ ಹಿರಿಯ ಬೆಳೆಗಾರ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ದಿ. ಬಿ.ಕೆ. ಮುತ್ತಣ್ಣ ಅವರ ಪತ್ನಿ ನೀನಾ ಮುತ್ತಣ್ಣ (76) ಸಾವಿಗೀಡಾದ ದುರ್ದೈವಿ.ಸಂಜೆ ಎಂದಿನಂತೆ ತೋಟ ದೊಳಗೆ ವಾಯುವಿಹಾರಕ್ಕೆಂದು ತೆರಳಿದ್ದ ನೀನಾ ಅವರು ಕತ್ತಲಾದರೂ ಬಾರದಿದ್ದಾಗ ಕುಟುಂಬದ ಮಂದಿ ಹುಡುಕಾಟ ಆರಂಭಿಸಿದಾಗ, ದುರ್ಘಟನೆ ಬೆಳಕಿಗೆ ಬಂದಿದೆ. ಮೃತೆ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಆನೆಗಳ ಹಿಂಡು ಮೋದೂರು ವಿಭಾಗದಲ್ಲಿ ಶಾಶ್ವತವಾಗಿ ನೆಲೆಸಿದ್ದು, ನಿವಾಸಿಗಳು ಜೀವ ಭಯ ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.