ಮಡಿಕೇರಿ, ಜು. 29: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಗಳಾದ ಐಚೆಟ್ಟಿರ ಮಾ. ಮುತ್ತಣ್ಣ ಹಾಗೂ ಬಾಚಮಾಡ. ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಐಚೆಟ್ಟಿರ ಮಾ. ಮುತ್ತಣ್ಣ-ಬಾಚಮಾಡ. ಡಿ. ಗಣಪತಿ ಬದ್‍ಕ್ ಮತ್ತು ಸಾಧನೆ ಬಗ್ಗೆ ಕೊಡವ ಭಾಷೆಯಲ್ಲಿ ಯಾವುದಾದರೂ ವಿಚಾರದ ಬಗ್ಗೆ ಪ್ರಬಂಧ, ಕಥೆ, ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಿಗದಿತ ಸಮಯದೊಳಗೆ ತಲುಪಿಸಬೇಕು.

ಯಾವುದೇ ಜಾತಿ, ಧರ್ಮ, ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರು ಭಾಗವಹಿಸಬಹುದು. ಪ್ರಬಂಧವು ಕೊಡವ ಭಾಷೆಯಲ್ಲೇ ಇದ್ದು, 200 ಸಾಲು ಮೀರದಂತೆ, ಸ್ಪಷ್ಟವಾಗಿ ಮುದ್ರಿತವಾಗಿರಬೇಕು. ಇಲ್ಲ ಕೈಬರಹದಲ್ಲಿರಬೇಕು ಹಾಗೂ ಕಥೆಯು ಒಂದು ಸಾವಿರ ಪದಗಳನ್ನು ಮೀರಬಾರದು. ಒಬ್ಬರು ಮೂರರಲ್ಲೂ ಭಾಗವಹಿಸಬಹುದು.

ಆದರೆ ಒಂದೇ ಪ್ರಬಂಧ/ಕಥೆ, ಕವಿತೆಯನ್ನು ಪ್ರತಿಯೊಬ್ಬರು ಬರೆಯಬೇಕು. ಪ್ರಬಂಧ, ಕಥೆ, ಕವಿತೆಯು ಬೇರೆಲ್ಲೂ ಪ್ರಕಟವಾಗಿರಬಾರದು. ಹಾಗೂ ಸ್ವಂತದ್ದಾಗಿರಬೇಕು. ಅನುವಾದಿತವಾಗಿರಬಾರದು. ಪ್ರಬಂಧ, ಕಥೆ, ಕವಿತೆ ಬರೆದು ಕಳುಹಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ.

ಇದನ್ನು ಇ-ಮೇಲ್ ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿom ಅಥವಾ ಖುದ್ದಾಗಿ ತಲುಪಿಸಬೇಕು. ಪ್ರಬಂಧ, ಕಥೆ ಹಾಗೂ ಕವಿತೆ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಅಭಿನಂದನಾ ಪತ್ರ ನೀಡಲಾಗುವುದು.

ಪ್ರಬಂಧ, ಕಥೆ ಹಾಗೂ ಕವಿತೆಯನ್ನು ಬರೆದ ಹಾಳೆಯಲ್ಲಿ ತಮ್ಮ ಹೆಸರನ್ನು ಬರೆಯುವಂತಿಲ್ಲ. ಅದನ್ನು ಬೇರೆ ಹಾಳೆಯಲ್ಲಿ ಬರೆಯಬಹುದು.

ವಿಳಾಸ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ-571201 ದೂ.ಸಂ.08272-229074 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.